Gm. Swamy
Mysore.
ಸಂಬಂಧಪಟ್ಟ ಅಧಿಕಾರಿಗಳಿಗೆ,
ವಿಷಯ: ನಮ್ಮ ಮನೆಯ e-swattu ಮಾಡಲು ವಿಳಂಬ ಮಾಡುತ್ತಿರುವ ಬಗ್ಗೆ.
ಸ್ವಾಮಿ,
ಈ ಮೂಲಕ ತಮಗೆ ತಿಳಿಯಪಡಿಸು ವುದೇನೆಂದರೆ ನಾನು ಹೊಳಲ್ಕೆರೆ ತಾಲೂಕ್ ದುಮ್ಮಿ ಗ್ರಾಮದ ನಿವಾಸಿಗಳಾದ ಶ್ರೀ gc. Maheshwarappa ಇವರ ಮಗನಾದ ನಾನು ಮೈಸೂರಿನಲ್ಲಿ ವಾಸವಿದ್ದು ನಮ್ಮ ಪಿತ್ರಾರ್ಜಿತ ಆಸ್ತಿಯನ್ನು ಭಾಗ ಮಾಡಿಸುವ ಸಲುವಾಗಿ ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾ. ದುಮ್ಮಿ ಗ್ರಾಮ ಪಂಚಾಯ್ತಿ ಕಚೇರಿಗೆ ಭೇಟಿ ಮಾಡಿದೆ, ಮತ್ತು ಈ ವಿಚಾರವಾಗಿ ದುಮ್ಮಿ ಗ್ರಾಮ ಪಂಚಾಯ್ತಿಯ ಬಿಲ್ ಕಲೆಕ್ಟರ್ ತಿಪ್ಪೇಶ್ ಮತ್ತು pdo ರಾಘವೇಂದ್ರ ಅವರನ್ನು ಅನೇಕ ಸಲ ಭೇಟಿ ಮಾಡಿ ಮತ್ತು ಫೋನ್ ಮುಖಾಂತರ ಕೂಡಾ ಸಂಪರ್ಕಿಸಿ e-swattu ಮಾಡಿಕೊಡಲು ವಿನಂತಿಸಿದೆ. ಈ ವಿಚಾರವಾಗಿ ಅವರು ಸರಿಯಾದ ಮಾಹಿತಿ ಕೊಡದೇ e-swattu ಮಾಡಲು ಏನಾದರೂ ಸಬೂಬು ಹೇಳುತ್ತಲೇ ಒಂದು ವರ್ಷದಿಂದ ಸತಾಯಿಸುತ್ತಿದ್ದಾರೆ. ಎಷ್ಟು ಬಾರಿ ಫೋನ್ ಮಾಡಿದರೂ ಏನಾದರೂ ನೆಪ ಹೇಳುತ್ತಲೇ ಇದ್ದಾರೆ. ಮತ್ತು ಇವರು ದುಮ್ಮಿ ಪಂಚಾಯ್ತಿ ಕಚೇರಿಗೆ ಸರಿಯಾಗಿ ಬರುವುದೇ ಇಲ್ಲ. ಇವರುಗಳಿಂದ ನಮಗೆ ಬಹಳ ಕಿರಿಕಿರಿಯಾಗಿ ತೊಂದರೆ ಅನುಭವಿಸಿದ್ದೇವೆ. ನಾನು ಮೈಸೂರಿನಲ್ಲಿ ವಾಸವಿರುವುದರಿಂದ ನಮ್ಮ ಸ್ವಂತ ಊರಿಗೆ ಪದೇ ಪದೇ ಬಂದು ಹೋಗಲು ತೊಂದರೆಯಾದರೂ ಸಹ, ಅನೇಕ ಸಲ ಮೈಸೂರಿನಿಂದ ಬಂದರೂ, ಇವರ ಭೇಟಿಯಾಗಲು ಪ್ರಯತ್ನಪಟ್ಟರೂ ಇವರು ಸಿಗುವುದೇ ಇಲ್ಲ. ಮತ್ತು ಇವರು ಬಹಳ ಉಡಾಫೆಯಿಂದ ವರ್ತಿಸುತ್ತಾರೆ. ಈ ಕಚೇರಿಯಲ್ಲಿ ಲಂಚ ಕೊಡದೆ ಯಾವ ಕೆಲಸವನ್ನೂ ಮಾಡುವುದಿಲ್ಲ, ಸತಾಯಿಸುವುದೇ ಇವರ ಅಭ್ಯಾ ಸವಾಗಿಬಿಟ್ಟಿದೆ. ಆದ್ದರಿಂದ ತಾವು ದಯವಿಟ್ಟು ಇದರ ಬಗ್ಗೆ ಗಮನಹರಿಸಿ ಇವರ ಮೇಲೆ ಶಿಸ್ತು ಕ್ರಮ ಕೈಗೊಂಡು ಸಾರ್ವಜನಿಕರ ಕೆಲಸಗಳನ್ನು ಸಕಾಲದಲ್ಲಿ ಮಾಡಿಕೊಡಲು ಇವರಿಗೆ ಎಚ್ಚರಿಕೆ ಕೊಡಬೇಕೆಂದು ತಮ್ಮಲ್ಲಿ ಈ ಮೂಲಕ ಮನವಿ ಮಾಡುತ್ತೇನೆ.
ತಾವು ನನ್ನ ಮನವಿಯನ್ನು ಪುರಸ್ಕರಿಸುತ್ತೀರೆಂದು ನಂಬುತ್ತೇನೆ.
ಇಂತಿ ನಿಮ್ಮ ವಿಧೇಯ.
Gm. Swamy
Mysore.
Ph: [protected]. Was this information helpful? |