ರಾಜ್ಯದಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ, ಕಟ್ಟುನಿಟ್ಟಾಗಿ, ಕಾನೂನುಬದ್ದವಾಗಿ ಬಿರುಸಿನ ಮತದಾನ ನಡೆಯುತ್ತಿದೆ. ಮತದಾರರು ಮತದಾನ ಮಾಡುತ್ತಿದ್ದಾರೆ. ಚುನಾವಣಾಧಿಕಾರಿಗಳು ಈ ಕ್ಷಣದವರೆಗೂ ಪ್ರಾಮಾಣಿಕವಾಗಿ ಕರ್ತವ್ಯ ಮೆರೆದಿದ್ದಾರೆ. ಆದರೆ ಇಲ್ಲೊಬ್ಬ ಬ್ರಿಜೇಶ್ ಕಾಳಪ್ಪ ಎಂಬುವವರು E.V.M ಮತಪೆಟ್ಟಿಗೆಯಲ್ಲಿ ಯಾವುದೇ ಬಟನ್ ಒತ್ತಿದರೂ ಬಿ.ಜೆ.ಪಿ ಗೆ ಹೋಗುತ್ತಿದೆ ಎಂಬುದರ ಬಗ್ಗೆ ಟ್ವೀಟ್ ಮಾಡಿದ್ದಾರೆ ಎಂದು ಪತ್ರಿಕಾ ಮಾದ್ಯಮ ನ್ಯೂಸ್ ಕನ್ನಡ.in ಎಂಬ ಮಾದ್ಯಮ ಉಲ್ಲೇಖಿಸಿರುತ್ತದೆ.ಇದು ಪ್ರಙಾವಂತ, ಪ್ರಾಮಾಣಿಕ ಮತದಾರರಿಗೆ ದಿಕ್ತಪ್ಪಿಸುವಂತಿದೆ.ಈ ಬಗ್ಗೆ ಅನೇಕ ಮತದಾರರು, ಅದರಲ್ಲಿ ನಮ್ಮ ದಲಿತರ ಮತದಾರರು ಗೊಂದಲಕ್ಕೀಡಾಗುವ ಸಾಧ್ಯತೆಗಳಿದ್ದು, ಬ್ರಿಜೇಶ್ ಕಾಳಪ್ಪನವರ ಈ ಹೇಳಿಕೆ ಚುನಾವಣಾ ವ್ಯವಸ್ಥೆಗೆ ಹಾಗೂ ಕಾನೂನು ಸುವ್ಯವಸ್ಥೆಗೆ ಬಂಗ ತರುವಂತಾಗಿರುತ್ತದೆ. ಬ್ರಿಜೇಶ್ ಕಾಳಪ್ಪನವರು ಉಲ್ಲೇಖಿಸಿರುವಂತೆ ಮತದಾರರು ಮತದಾನ ಮಾಡದೇ ಹಿಂತಿರುಗುತ್ತಿದ್ದಾರೆ ಎಂದಿರುತ್ತದೆ.
ಸ್ವಾಮಿ, ಮತದಾನದ ಹಕ್ಕು ಮತ್ತು ಜವಾಬ್ದಾರಿಯನ್ನು ಪ್ರಜಾಪ್ರಭುತ್ವಕ್ಕೆ ಅಡಿಪಾಯವಾಗಿ ಕಲ್ಪಿಸಿಕೊಟ್ಟಿದ್ದೇ ಬಾಬಾಸಾಹೇಬ್ ಡಾ||ಬಿ.ಆರ್.ಅಂಬೇಡ್ಕರ್ ರವರು.
ಇವರ ಒಂದು ಹೇಳಿಕೆ ಚುನಾವಣೆ ವ್ಯವಸ್ಥೆಗೆ ಧಕ್ಕೆ ತರುವಂತಾದ್ದರಿಂದ, ನಮ್ಮ ಹಕ್ಕು ಮೇಲಾಗಿ ದಲಿತ ಮತದಾರರನ್ನು, ಇತರೆ ಮತದಾರರನ್ನು ದಿಕ್ತಪ್ಪಿಸುವಂತಿರುತ್ತದೆ. ಆದ್ದರಿಂದ ಕಾವಂದರಾದ ತಾವು ಈ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ನಾಗರೀಕ, ಪ್ರಙಾವಂತ ಮತದಾರರಿಗೆ ಕೂಡಲೇ ಸ್ಪಷ್ಟೀಕರಣ ನೀಡುವುದರೊಂದಿಗೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರಿದೆ.ಈ ಬಗ್ಗೆ ತಮ್ಮ ಅವಗಾಹನೆಗಾಗಿ ನನ್ನ ಮೊಬೈಲ್ ಫೋನ್ ನಲ್ಲಿ ಬಂದಂತಹ ಸ್ಕ್ರೀನ್ ಶಾಟ್ ಗಳನ್ನು ತಮಗೆ ಕಳುಹಿಸಿರುತ್ತೇನೆ.ತಾವು ಸಹ ಮೇಲ್ಕಂಡಂತಹ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಈ ಪ್ರಕರಣದ ಸಾಕ್ಷ್ಯಾಧಾರಗಳನ್ನಾಗಿ ಪರಿಗಣಿಸಬೇಕಾಗಿ ಕೋರಿದೆ.
ನನ್ನ ಪ್ರಕರಣದ ಆಧಾರದ ಮೇಲೆ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡಲು ಕೋರಿದೆ.
(ವಿಶೇಷ ಸೂಚನೆ..ಮತದಾನದ ಬಗ್ಗೆ ಸಾರ್ವಜನಿಕರಿಗೆ ಕೂಡಲೇ ಸ್ಪಷ್ಟೀಕರಣ ನೀಡಬೇಕಾಗಿ ಕೋರಿದೆ.)
ಸದರೀ ಪ್ರಕರಣವನ್ನು ಮತದಾರರ ಹಿತದೃಷ್ಠಿಯಿಂದ ತಮ್ಮಲ್ಲಿ ಸಲ್ಲಿಸಿದೆ.
ದೂರುದಾರರು- ಡಾ||ಸಿ.ಎಸ್.ರಘು. ರಾಜ್ಯಾಧ್ಯಕ್ಷರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಸಾಮಾಜಿಕ ನ್ಯಾಯಕ್ಕಾಗಿ)
ಮೊಬೈಲ್ ಸಂಖ್ಯೆ:[protected]
Was this information helpful? |
Post your Comment