Address: | ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ರಾಮನಾಥಪುರ ನಿಲ್ದಾಣ |
ದಿನಾಂಕ 1/1/2020 ರಂದು ಮಧ್ಯಾಹ್ನ 2 ಗಂಟೆ ಸುಮಾರು, ಹಾಸನ ಜಿಲ್ಲೆಯ ರಾಮನಾಥಪುರ ಬಸ್ ನಿಲ್ದಾಣ ದಲ್ಲಿ ಬೆಂಗಳೂರು ಬಸ್ ಇದೆಯೇ ಎಂದು ನಿಯಂತ್ರಕರ ಕೊಠಡಿ ಯಲ್ಲಿ ವಿಚಾರಿಸಲು ಹೋದಾಗ ಕೊಠಡಿ ಯಲ್ಲಿ ಲಲ್ಲೆ ಹೊಡೆಯುತ್ತಾ ಇದ್ದರು . ನಾವು ವಿಚಾರಿಸುವ ಕಡೆ ಗಮನ ಇಲ್ಲ ದೆ ನಮ್ಮನ್ನು ಅವಾಚ್ಯ ಶಬ್ದ ಗಳಲ್ಲಿ ನಿಂದಿಸಿ, ಅಲ್ಲಿಂದ ಹೊರಗೆ ಹೋಗಿ ಎಂದು ಅವಾಚ್ಯ ವಾಗಿ ನಿಂದಿಸಿರುತ್ತಾರೆ. ಅಲ್ಲಿನ ಮೇಲಧಿಕಾರಿಗೆ ಈ ವಿಷಯ ತಿಳಿಸಲಾಗಿ ನಿಯಂತ್ರಕರು ಮಾನಸಿಕ ರೋಗಿ ಎಂದು ಬೇಜವಾಬ್ದಾರಿ ಉತ್ತರ ನೀಡಿರುತ್ತಾರೆ. ಪುನಃ ನಮ್ಮನ್ನು ಇಲ್ಲಿ ನಿಲ್ಲಬೇಡ ಹೋಗು ಎಂದು ಅವಾಚ್ಯ ಶಬ್ದ ಗಳಿಂದ ನಿಂದಿಸಿರುವ ನಿಯಂತ್ರಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಈ ದೂರು. Was this information helpful? |
Post your Comment