Address: | ಕೊಳ್ಳೇಗಾಲ | Website: | Consumer compliants |
ದಿನಾಂಕ ೨೬-೨-೨೦೨೧ ರಂದು ಸಂಜೆ ಐದರ ಸುಮಾರಿಗೆ ಕೊಳ್ಳೇಗಾಲದಿಂದ ಬೆಂಗಳೂರಿಗೆ ಹೋಗೋಕೆ ಕೊಳ್ಳೇಗಾಲದ ಹೊಸ ಬಸ್ ನಿಲ್ದಾಣದಲ್ಲಿ ಕರ್ನಾಟಕ ಸಾರಿಗೆಯೊಝದನ್ನ ಹತ್ತಿದೆ. ಬಸ್ಸಲ್ಲಾಗಲೇ ೨೫ ಜನರಿದ್ದರು. ನಿರ್ವಾಹಕನು ಒಬ್ಬರಿಗೆ ಟಿಕೆಟ್ ಕೊಟ್ಟು ನನ್ನ ಬಳಿ ಎಲ್ಲಿಗೆ ಅಂದರು. ಬೆಂಗಳೂರಿಗೊಂದು ಟಿಕೆಟ್ ಕೊಡಿ ಅಂದು ರೂಪಾಯಿ ಐನೂರು ಕೊಟ್ಟಾಗ, ಆತ ಟಿಕೆಟ್ ದರ ೧೪೦. ಹಾಗಾಗಿ ನಲವತ್ತು ರುಪಾಯಿ ಚಿಲ್ಲರೆ ಕೊಡಿ ಎಂದರು. ನನ್ನ ಬಳಿ ಚಿಲ್ಲರೆಯಿಲ್ಲವೆಂದೆ. ಆದಕ್ಕಾತ, ಚೀಟಿಯ ಹಿಂಭಾಗದಲ್ಲಿ ಬರೆದು ಕೊಡೋಕೆ ಮುಂದಾದ. ಮುಂಚೆ ಚೀಟಿ ಪಡೆದ ಪ್ರಯಾಣಿಕನಿಗೆ, ನಿರ್ವಾಹಕನು ತನ್ನ ಕಿಸೆಯೊಳಗಿದ್ದ ಇನ್ನೂರು, ನೂರು, ಐವತ್ತು, ಇಪ್ಪತ್ತು, ಹತ್ತು ರುಪಾಯಿಗಳ ಇಡುಗಂಟಿಂದ ಚಿಲ್ಲರೆ ತೆಗೆದು ಕೊಟ್ಟಿದ್ದು ನಾ ನೋಡಿದ್ದೆ. ಹಾಗಾಗಿ, ನಿರ್ವಾಹಕನ ಬಳಿ ಕೂಡಲೆ ಚಿಲ್ಲರೆ ಕೊಡುವಂತೆ ಒತ್ತಾಯಿಸಿದೆ. ಅದಕ್ಕಾತ, ಇರೋ ಚಿಲ್ಲರೆಯೆಲ್ಲ ನಿಮಗೇ ಕೊಟ್ಟರೆ, ಮುಂದೆ ಟಿಕೇಟ್ ತಗೊಳ್ಳೋರಿಗೇನು ಕೊಡಲಿ ಅನ್ನೋ ಸಂಬಂಧವಿಲ್ಲದ ಮಾತನ್ನಾಡಿದ. ನಾನದಕ್ಕೆ, ಚಿಲ್ಲರೆ ಬೇಕಾದಶ್ಟಿದೆ, ನನಗದರಲ್ಲಿ ಕೊಡಬಹುದೆಂದೆ. ಅದಕ್ಕಾತ, "ಏಯ್, ಬರ್ಕೊಟ್ಟಿದ್ದು ತಗೊಳ್ಳಂಗಿದ್ದರೆ ಇರು. ಇಲ್ದಿದ್ದರೆ ಬಸ್ಸಿಂದ ಕೆಳಗಿಳಿ ಅಂತ ಏಕವಚನದಲ್ಲಿ ಮಾತಾಡಿದ. ನಾ ಬಸ್ಸಿಂದಿಳಿಯಲಿಲ್ಲ. ಆತ ಬಸ್ಸಿನಲ್ಲಿದ್ದ ಎಲ್ಲರಿಗೂ ಟಿಕೆಟ್ ಹಂಚೋ ತನಕ ಕಾದು, ಬಳಿಕ ನನ್ನ ಬಳಿ ಬಂದ ನಿರ್ವಾಹಕನಿಗೆ ನಾನು ನಿನ್ನ ಬಗ್ಗೆ ದೂರು ಕೊಡ್ತೀನಿ ಅಂದೆ. ಅದಕ್ಕಾತ ಧಾರಾಳವಾಗಿ ಕೊಡಿ. ನನಗೇನೂ ಹೆದರಿಕೆಯಿಲ್ಲ. ದಂಡ ಹಾಕಬಹುದು. ಹೆಚ್ಚೆಂದರೆ, ಕೆಲಸ ಹೋಗಬಹುದು. ಅಶ್ಟೇ ತಾನೆ ಆಂದ. ನಾನು, ಈಗ ತಾವಾಡಿದ ಮಾತನ್ನೂ ದೂರಿನಲ್ಲಿ ಬರೀತೀನಿ ಅಂದೆ. ಆತ, ಧಾರಾಳವಾಗಿ ಬರೆಯಿರಿ ಅಂದ.
ಚಿಲ್ಲರೆಯಿದ್ದರೂ ಚೀಟಿ ಹಿಂದೆ ಚಿಲ್ಲರೆಯ ಹಣ ಬರೆದು ಕೊಟ್ಟ ನಿರ್ವಾಹಕನ(ರ) ಕೆಟ್ಟ, ಮೋಸದ ನಡವಳಿಕೆಯಿಂದ ಸಾರಿಗೆ ಸಂಸ್ಥೆಗೆ ಕೆಟ್ಟ ಹೆಸರು ಬರ್ತಿದೆ. ಇದರಿಂದ ಪ್ರಯಾಣಿಕರೂ ಬಸ್ಸನ್ನ ಬಿಟ್ಟು ಕಾರ್ಗಳನ್ನ ಕೊಂಡುಕೊಳ್ಳೋ ಮನಸ್ಸು ಮಾಡಿದ್ದಾರೆ.
ನೀವು ಈ ಕೂಡಲೇ ಈ ನಿರ್ವಾಹಕನ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳತಕ್ಕದ್ದು. ಇಲ್ಲದಿದ್ದಲ್ಲಿ ಸಾರಿಗೆ ಸಂಸ್ಥೆಗೆ ಕೆಟ್ಟ ಹೆಸರು ತಪ್ಪದೇ ಬರುವುದಂತೂ ನಿಜ.
ಡಿಪೋ: ಚಾಮರಾಜನಗರ(ಬಸ್ಸಲ್ಲಿರುವಂತೆ)
ಡಿಪೋ: ಕೊಳ್ಳೇಗಾಲ(ಟಿಕೆಟ್ನಲ್ಲಿರುವಂತ�...⇄
ವಿಭಾಗ: ಚಾಮರಾಜನಗರ
ನಿರ್ವಾಹಕನ ಹೆಸರು: ಮೂರ್ತಿ
Was this information helpful? |
Post your Comment