Address: | Bagalkot, Karnataka, 587206 |
ಮಾನ್ಯರೆ,
ವಿಷಯ:ಭೀಮಪ್ಪ ಲಾಳಿ, ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬಾದಾಮಿ ರವರು ಭ್ರಷ್ಟಾಚಾರದಲ್ಲಿ ತೊಡಗಿರುವ ಪಿ ಡಿ ಓ ರವರನ್ನು ಆವೇಶಕ್ಕೆ ಒಳಗಾಗಿ ರಕ್ಷಣೆ ಮಾಡುತ್ತಿರುವ ಕುರಿತು.
ಈ ಮೇಲ್ಕಾಣಿಸಿದ ವಿಷಯಕೆ ಸಂಬಂಧಿಸಿದಂತೆ ನೀರಲಕೇರಿ ಗ್ರಾ. ಪ. ವ್ಯಾಪ್ತಿಯ ರ.ತಿಮ್ಮಾಪುರ ಗ್ರಾಮದ ಆಸ್ತಿ ನ೦. ೩೨೯/ಅ, ಹಾಗು ೫೦೭ ಆಸ್ತಿಗಳಿಗೆ ಸಂಬಂಧಿಸಿದಂತೆ ಸದರಿ ಅಸ್ತಿಯಲ್ಲಿ ನನ್ನ ಪಾಲು ಇದೆಯಂದು ನಾನು ತಕರಾರು ಅರ್ಜಿ ಗ್ರಾ. ಪ. ನೀರಲಕೇರಿಗೆ ಸಲ್ಲಿಸಿರುತೇನೆ ನನ್ನ ಯಾವುದೇ ತಕರಾರು ಅರ್ಜಿಗಳನ್ನೂ ಪರಿಗಣಿಸದೆ ಅಂದಿನ ಪಿ ಡಿ ಓ ರವರು ಮಾನ್ಯ S. R. ಯಾದವಾಡ ರವರು ಶ್ರೀ ವೆಂಕಣ್ಣ ಉಗಲವಾಟ ರವರ ಹೆಸರಿಗೆ ಕಾನೂನು ಬಾಹಿರ ಲಂಚಪಡೆದು ನಮ್ಮ ಆಸ್ತಿಯನ್ನು ವರ್ಗಾವಣೆ ಮಾಡಿರುತ್ತಾರೆ. ಮತ್ತು ಅಸ್ತಿ ನ೦. ೫೦೭ ರಲ್ಲಿ ಪಂಚಾಯತ ರಾಜ್ ಕಾಯದೆಯಾ ವಿರುದ್ಧವಾಗಿ ಪಿ ಡಿ ಓ ದಡ್ಡಿಬಾಗಿಲು ರವರು ನಕಲಿ ದಾಖಲಾತಿಗಳನ್ನೂ ಸೃಷ್ಟಿಸಿ ನಮ್ಮ ಅಸ್ತಿಯನ್ನು ಶ್ರೀ ಭೀಮಪ್ಪ ಮಾದರ ರವರಿಗೆ ವರ್ಗಾಯಿಸಿದ್ದಾರೆ. ಈ ವಿಷಯವನ್ನು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬಾಗಲಕೋಟ ರವರ ಗಮನಕೆ ದಿನಾಂಕ :೦೬.೦೧.೨೦೧೮ ಹಾಗು ೦೮.೦೬.೨೦೧೮ ರಂದು ದೂರು ಸಲ್ಲಿಸಿರುತೇನೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬಾಗಲಕೋಟ ರವರ ಸಾರ್ವಜನಿಕರ ಕುಂದು ಕೊರತೆಯ ಅರ್ಜಿಯನ್ನ ಭೀಮಪ್ಪ ಲಾಳಿ, ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬಾದಾಮಿ ರವರಿಗೆ ೨೭. ೦೧.೨೦೧೮ ರಂದು ವರ್ಗಾಯಿಸಿ ಈ ಕುರಿತು ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲ್ಲು ಆದೇಶಿಸಿರುತ್ತಾರೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇದುವರೆಗೂ ಯಾವದೇ ರೀತಿಯ ಪರಿಶೀಲಿಸದೆ ಕಾಲಹರಣ ಮಾಡುತ್ತ ಭ್ರಷ್ಟ ಅಧಿಕಾರಿಗಳ್ಳನ್ನು ರಕ್ಷಣೆ ಮಾಡುತ್ತಿದ್ದಾರೆ ಈ ನಡವಳಿಕೆಗಳನ್ನು ಗಮನಿಸಿದರೆ ಭೀಮಪ್ಪ ಲಾಳಿ, ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬಾದಾಮಿ ರವರು ಪಿ ಡಿ ಓ ಗಳನ್ನೂ ಭ್ರಷ್ಟಾಚಾರದಲ್ಲಿ ಸಂಪೂರ್ಣ ತೊಡಗಿಸಿ ಬಾದಾಮಿಯು ಐತಿಹಾಸಿಕ ಹಿನ್ನಲೆಯ ತಾಲೂಕನು ಭ್ರಷ್ಟ ತಾಲೂಕನ್ನು ಮಾಡಲು ಹೊರಟಿದ್ದಾರೆ. ತಾವುಗಳು ಈ ವಿಷಯವನ್ನು ಕೂಲಂಕುಷವಾಗಿ ಪರಶೀಲಿಸಿ ಭ್ರಷ್ಟ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮತಗೆದುಕೊಳ ಬೇಕೆಂದು ವಿನಂತಿಸಿಕೊಳ್ಳುತೇನೆ.
ಧನ್ಯವಾದಗಳು
ಇಂದ, ನಿಮ್ಮ ವಿಶ್ವಾಸಿ
ಶ್ರೀ ಅರವಿಂದ ಪಾಂಡಪ್ಪ ನೀಲರ
ಸಾ II ಯಂಡಿಗೇರಿ ತಾ II ಬಾದಾಮಿ
ಜಿ II ಬಾಗಲಕೋಟ ಪಿನ್II ೫೮೭ ೨೦೬
ಮೊಬೈಲ್ ೯೮೪೪೫೨೦೭೬೫ Was this information helpful? |
Post your Comment