Address: | Kolar, Karnataka, 563137 |
ಈ .ನಾರಾಯಣಸ್ವಾಮಿ
ಬಿನ್ ಲೇಟ್.ಈರೇಗೌಡ
ವಾಸ : ಕೊಮ್ಮನಹಳ್ಳಿ ಗ್ರಾಮ
ತೊರಲಕ್ಕಿ ಅಂಚೆ, ಟೇಕಲ್ ಹೋಬಳಿ
ಮಾಲೂರು ತಾಲ್ಲೂಕು
ಕೋಲಾರ ಜಿಲ್ಲೆ .
ಸಂಬಂಧಪಟ್ಟ ಅಧಿಕಾರಿಗಳಿಗೆ,
ವಿಷಯ: ನಮ್ಮ ಮನೆಯ ಇ-ಸ್ವತ್ತು ಖಾತಾ ಮಾಡಲು ವಿಳಂಬ ಮಾಡುತ್ತಿರುವ ಬಗ್ಗೆ.
ಸ್ವಾಮಿ,
ಈ ಮೂಲಕ ತಮಗೆ ತಿಳಿಯಪಡಿಸು ವುದೇನೆಂದರೆ ನಾನು ಮಾಲೂರು ತಾಲ್ಲೂಕು, ಕೊಮ್ಮನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಈ ಹಿಂದೆ ಖಾತಾ (ಫಾರಂ 9 ಮತ್ತು 11) ಮಾಡಿಸಿದ್ದು, ಕಂದಾಯವನ್ನು ಕಟ್ಟಿ ನಮ್ಮಹಕ್ಕು ಬಾಧ್ಯತೆ ಹಾಗು ಸ್ವಾಧೀನದಲ್ಲಿ ವಾಸವಿರುವ ಮೇಲ್ಕಂಡ ಗ್ರಾಮದ ಆಸ್ತಿಯ ಇ-ಸ್ವತ್ತು ಖಾತಾ ಮಾಡಿಸುವ ಸಲುವಾಗಿ ಕೋಲಾರ ಜಿಲ್ಲೆ, ಮಾಲೂರು ತಾಲ್ಲೂಕು. ನೂಟುವೆ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ 2017 ಅರ್ಜಿಯನ್ನ ಸಲ್ಲಿಸಿದ್ದು, ಸ್ವತ್ತಿನ ಸಂಖ್ಯೆ PID No.[protected] ಮತ್ತು[protected] ನೀಡಿದ್ದು, ಈ ವಿಚಾರವಾಗಿ ನೂಟುವೆ ಗ್ರಾಮ ಪಂಚಾಯ್ತಿಯ Secretory ರಮೇಶ್ ಹಾಗು PDO ಕೃಷ್ಣಪ್ಪ ರವರನ್ನ ನನ್ನ ಮಗ ಮಂಜುನಾಥ ಅನೇಕ ಬಾರಿ ಭೇಟಿ ಮಾಡಿಮತ್ತು ಫೋನ್ ಮುಖಾಂತರ ಕೂಡಾ ಸಂಪರ್ಕಿಸಿ ಇ-ಸ್ವತ್ತು ಖಾತಾ ಮಾಡಿಕೊಡಲು ವಿನಂತಿಸಿದೆ. ಈ ವಿಚಾರವಾಗಿ ಅವರು ಸರಿಯಾದ ಮಾಹಿತಿ ಕೊಡದೇ ಇ-ಸ್ವತ್ತು ಖಾತಾ ಮಾಡಲು ಏನಾದರೂ ಸಬೂಬು ಹೇಳುತ್ತಲೇ 2 ವರ್ಷದಿಂದ ಸತಾಯಿಸುತ್ತಿದ್ದಾರೆ. ಎಷ್ಟು ಬಾರಿ ಫೋನ್ ಮಾಡಿದರೂ ಏನಾದರೂ ನೆಪ ಹೇಳುತ್ತಲೇ ಇದ್ದಾರೆ. ಇವರ ಭೇಟಿಯಾಗಲು ಪ್ರಯತ್ನಪಟ್ಟರೂ ಇವರು ಸಿಗುವುದೇ ಇಲ್ಲ. ಮತ್ತು ಇವರು ಬಹಳ ಉಡಾಫೆಯಿಂದ ವರ್ತಿಸುತ್ತಾರೆ. ಈ ಕಚೇರಿಯಲ್ಲಿ ಲಂಚ ಕೊಡದೆ ಯಾವ ಕೆಲಸವನ್ನೂ ಮಾಡುವುದಿಲ್ಲ, ಸತಾಯಿಸುವುದೇ ಇವರ ಅಭ್ಯಾ ಸವಾಗಿಬಿಟ್ಟಿದೆ. ಆದ್ದರಿಂದ ತಾವು ದಯವಿಟ್ಟು ಇದರ ಬಗ್ಗೆ ಗಮನಹರಿಸಿ ಇವರ ಮೇಲೆ ಶಿಸ್ತು ಕ್ರಮ ಕೈಗೊಂಡು ಸಾರ್ವಜನಿಕರ ಕೆಲಸಗಳನ್ನು ಸಕಾಲದಲ್ಲಿ ಮಾಡಿಕೊಡಲು ಇವರಿಗೆ ಎಚ್ಚರಿಕೆ ಕೊಡಬೇಕೆಂದು ತಮ್ಮಲ್ಲಿ ಈ ಮೂಲಕ ಮನವಿ ಮಾಡುತ್ತೇನೆ.
ತಾವು ನನ್ನ ಮನವಿಯನ್ನು ಪುರಸ್ಕರಿಸುತ್ತೀರೆಂದು ನಂಬುತ್ತೇನೆ.
ಇಂತಿ ನಿಮ್ಮ ವಿಧೇಯ.
ಈ .ನಾರಾಯಣಸ್ವಾಮಿ
ಬಿನ್ ಲೇಟ್.ಈರೇಗೌಡ
ವಾಸ : ಕೊಮ್ಮನಹಳ್ಳಿ ಗ್ರಾಮ
ತೊರಲಕ್ಕಿ ಅಂಚೆ, ಟೇಕಲ್ ಹೋಬಳಿ
ಮಾಲೂರು ತಾಲ್ಲೂಕು
ಕೋಲಾರ ಜಿಲ್ಲೆ .
Ph: [protected]. Was this information helpful? |
Post your Comment