Karnataka RDPR — Irresponsible behavior of panchayath development officer, Tumminakatti, Ranebennur Tq, Haveri Dist.

Address:Tumminakatti
Website:[email protected]

ಮನೆಯ ಮುಂದೆ ಸರ್ಕಾರೀ ರಸ್ತೆಯಲ್ಲಿ ಅನ್ಯರು ಅನಧಿಕೃತವಾಗಿ ಬೆಳೆಸಿರುವ 2 ತೆಂಗಿನಮರಗಳಿಂದ ನನ್ನ ಹಾಗೂ ನನ್ನ ಕುಟುಂಬದ ಸದಸ್ಯರಿಗೆ ಜೀವ ಭಯ ಇರುವ ಕುರಿತು.

ಈ ಮೇಲ್ಕಂಡ ವಿಷಯ ಹಾಗೂ ಉಲ್ಲೇಖದನ್ವಯ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ತುಮ್ಮಿನಕಟ್ಟಿ ಗ್ರಾಮದ ಶಶಿಕಲಾ ರಾ ಉಳಸಾಂದ್ರ ಬಡ ಅಂಗವಿಕಲ ಮಹಿಳೆಯಾದ ನಾನು ದಯಾಪರರಿಗೆ ವಂದಿಸುತ್ತಾ ಬೇಡಿಕೊಳ್ಳುವುದೇನೆಂದರೆ ನಮ್ಮ ಗ್ರಾಮದ ನನ್ನ ಮನೆಯ ಮುಂಭಾಗದಲ್ಲಿ ಸರ್ಕಾರೀ ರಸ್ತೆಯಲ್ಲಿ ಇತರ ಖಾಸಗಿ ವ್ಯಕ್ತಿ ಅನಧಿಕೃತವಾಗಿ ಬೆಳೆಸಿರುವ ತೆಂಗಿನ ಮರಗಳಿಂದ ಬೀಳುವ ತೆಂಗಿನ ಕಾಯಿಗಳು ಹಾಗೂ ತೆಂಗಿನ ಗರಿಗಳಿಂದ ನನ್ನ ಮನೆಯ ಕೆಂಪು ಹೆಂಚುಗಳೆಲ್ಲವೂ ಒಡೆದು ಹೋಗುತ್ತಿವೆ, ಅಷ್ಟು ಮಾತ್ರವಲ್ಲದೆ ಹಲವಾರು ಬಾರಿ ನನ್ನನ್ನೂ ಸೇರಿದಂತೆ ನನ್ನ ಕುಟುಂಬದವರ ಮೇಲೆಯೂ ತೆಂಗಿನಕಾಯಿಗಳು ಬಿದ್ದು ಸ್ವಲ್ಪದರಲ್ಲಿ ಆಪತ್ತಿನಿಂದ ಪಾರಾಗಿದ್ದೇವೆ, ಆದರೆ ಪ್ರತಿದಿನವೂ ಹೀಗೆ ಜೀವಭಯವಿದ್ದರೆ ನಾವು ನೆಮ್ಮದಿಯಿಂದ ಬದುಕುವುದು ಹೇಗೆ?. ಒಡೆದ ಹೆಂಚುಗಳನ್ನು ಬದಲಾಯಿಸಲು ಪದೇ ಪದೇ ಹಣ ಖರ್ಚು ಮಾಡಿ ಸರ್ಕಾರದಿಂದ ಬರುವ ಅಂಗವಿಕಲರ ಪಿಂಚಣಿಯ ಅರ್ಧದಷ್ಟು ಹಣವೇ ಕೈಗೆ ಸಿಗದಂತಾಗಿದೆ. ತೆಂಗಿನ ಗರಿಗಳು, ಕೊಂಬೆಗಳು ಹಾಗೂ ಕಾಯಿಗಳು ಬೀಳುವುದರಿಂದ ಅಂಗವಿಕಲೆಯಾದ ನನಗೆ ತುಂಬಾ ತೊಂದರೆಯಾಗುತ್ತಿದೆ. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಈಗ ತೆರವುಗೊಳಿಸುತ್ತೇವೆ ಆಗ ತೆರವುಗೊಳಿಸುತ್ತೇವೆ ಎಂದು ಬೇಜವಾಬ್ದಾರಿಯಿಂದ ನನ್ನ ಅರ್ಜಿಗಳಿಗೆ ಬೆಲೆ ಇಲ್ಲದಂತಾಗಿದೆ. ತುಮ್ಮಿನಕಟ್ಟಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತ್ ಸದಸ್ಯರು ಠರಾವು ಪಾಸು ಮಾಡಿ ಸುಮಾರು 10 ತಿಂಗಳುಗಳು ಅದನ್ನು ಅನುಷ್ಠಾನಕ್ಕೆ ತರದೇ ಮೂಲೆಗೆ ತಳ್ಳಿ ಬಿಟ್ಟಿದ್ದಾರೆ. ಪಂಚಾಯತಿಯ 19 ಜನ ಚುನಾಯಿತ ಸದಸ್ಯರು ಮರಗಳನ್ನು ತೆರವುಗೊಳಿಸಲು ಸಮ್ಮತಿಸಿ ಸಹಿಗಳನ್ನು ಮಾಡಿ ಠರಾವು ಪಾಸು ಮಾಡಿದ್ದರೂ PDO ಅಧಿಕಾರಿ ಠರಾವನ್ನು ಅನುಷ್ಠಾನಕ್ಕೆ ತರದೇ ಮೂಲೆಗೆ ತಳ್ಳಿದ್ದಾರೆ. ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಈ ವಿಷಯವಾಗಿ ನಾನು ಕಳೆದ ಸತತವಾಗಿ ನಾಲ್ಕು ವರ್ಷಗಳಿಂದ ಗ್ರಾಮಪಂಚಾಯಿತಿಗೆ ಅಲೆದರೂ, ನನ್ನ ಸಮಸ್ಯೆಯನ್ನು ಬಗೆಹರಿಸದ ಕಾರಣವಾಗಿ ನಾನು ರಾಣೆಬೆನ್ನೂರು ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ರಾಣೆಬೆನ್ನೂರು ತಾಲ್ಲೂಕು ತಹಸೀಲ್ದಾರ್ ರವರು, ಹಾವೇರಿ ಜಿಲ್ಲಾ ಮೇಲ್ಮನವಿ ಪ್ರಾಧಿಕಾರ, ಹಾವೇರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಹಾವೇರಿ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಸೇರಿದಂತೆ ಹಾವೇರಿ ಜಿಲ್ಲಾಧಿಕಾರಿಗಳಿಗೂ ಲಿಖಿತ ಮನವಿಯನ್ನು ಸಲ್ಲಿಸಿದ್ದರೂ ಅವರಿಂದಲೂ ಯಾವುದೇ ಸಹಾಯವಾಗಿರುವುದಿಲ್ಲ.
ಆದ್ದರಿಂದ ದಯಾಪರರಾದ ತಾವಾದರೂ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಈ ಬಡ ಅಂಗವಿಕಲ ಮಹಿಳೆಗೆ ನ್ಯಾಯ ದೊರಕಿಸಿಕೊಡಬೇಕೆಂದು ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ.
+2 photos
Was this information helpful?
No (0)
Yes (2)
Karnataka RDPR customer support has been notified about the posted complaint.
Complaint comments 

Post your Comment

    I want to submit Complaint Positive Review Neutral Comment
    code
    By clicking Submit you agree to our Terms of Use
    Submit
    Karnataka RDPR
    customer care contact
    Customer satisfaction rating Customer satisfaction rating is a complex algorithm that helps our users determine how good a company is at responding and resolving complaints by granting from 1 to 5 stars for each complaint and then ultimately combining them all for an overall score.
    Read more
    4%
    Complaints
    368
    Pending
    0
    Resolved
    14
    Karnataka RDPR Phone
    +91 80 2235 3925
    +91 80 2238 4574
    +91 80 2235 3929
    Karnataka RDPR Address
    3rd Gate, 3rd Floor, MS Building, Bangalore, Karnataka, India - 560001
    View all Karnataka RDPR contact information