ಅಬ್ಬಿಗೇರಿಯ ಸಾರ್ವಜನಿಕರಾದ ನಾವುಗಳು ಗ್ರಾಮದಲ್ಲಿ ರಸ್ತೆಯನ್ನು ಆಕ್ರಮಿಸಿ ಮನೆಯ ಕಟ್ಟಡ, ಚರಂಡಿ ಆಕ್ರಮಿಸಿ ಕಟ್ಟೆಗಳನ್ನು ಗ್ರಾಮದಲ್ಲಿ ಗ್ರಾಮ ಪಂಚಾಯತ ಸದಸ್ಯರು ಹಾಗೂ ಸಂಬಂಧಿಗಳು ಆಕ್ರಮಿಸುತ್ತಿದ್ದು ಇದರ ಬಗ್ಗೆ ಗ್ರಾಮದ ಪಿ ಡಿ ಓ ಅಧಿಕಾರಿಗಳಿಗೆ ಮೌಖಿಕವಾಗಿ ಹೇಳಿದರು ಅಧಿಕಾರಿಗಳು ಸದಸ್ಯರ ಪರವಾಗಿ ಮಾತನಾಡುತ್ತಿದ್ದು ಗ್ರಾಮದಲ್ಲಿ ನಾನು ಮುಂದೆ ನೀನು ಮುಂದೆ ಎಂದು ರಸ್ತೆಯನ್ನು ಒತ್ತುವರಿ ಮಾಡುತ್ತಾ ಬರುತ್ತಿದ್ದಾರೆ . ವಿಪರ್ಯಾಸ ಏನೆಂದರೆ ಅಧಿಕಾರಿಗಳಿಗೆ ಎಲ್ಲ ಗೊತ್ತಿದ್ದರು ಗೊತ್ತಿಲ್ಲ ಎಂಬಂತೆ ವರ್ತಿಸುವ ಮೂಲಕ ಆಕ್ರಮಕ್ಕೆ ಕುಮ್ಮಕ್ಕು ನೀಡುತ್ತಾ ಬಡ ಜನರ ಸಮಸ್ಯೆಯನ್ನು ಲೆಕ್ಕಿಸದೆ ಬೇಕ ಬೇಕಾದವರಿಗೆ ಹಾಗೂ ಗ್ರಾಮ ಪಂಚಾಯತ ಸದಸ್ಯರಿಗೆ ನರೇಗಾ ಹಣ ಜಮ ಮಾಡಿಸುತ್ತಾ ಯಾವಾಗಲು ಗ್ರಾಮ ಪಂಚಾಯತ ಕಾರ್ಯಾಲಯಲ್ಲಿ ಇರದೇ ಮೀಟಿಂಗ್ ಇದೆ ಎಂದು ಬೇಜವಾಬ್ದಾರಿಯ ಉತ್ತರ ನೀಡುತ್ತಾರೆ.ಇದರ ಬಗ್ಗೆ ರೋಣ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಯವರನ್ನು ಕೇಳಿದ್ರೆ ಅಬ್ಬಿಗೇರಿ ಪಂಚಾಯತಗೂ ನನಗೂ ಸಂಬಂಧವಿಲ್ಲ ಎಂಬಂತೆ ಉಹಾ ಪೊಹದ ಉತ್ತರ ನೀಡುವ ಅಧಿಕಾರಿಗಳನ್ನು ನಮ್ಮ ಪಂಚಾಯತ ವ್ಯಾಪ್ತಿಯಲ್ಲಿ ಇರಿಸದೆ ವರ್ಗಾಯಿಸಿ ಬಡ ಜನರ ಸೇವೆ ಮಾಡುವ ನಿಸ್ವಾರ್ಥ ಅಧಿಕಾರಿಯನ್ನು ನೇಮಕ ಮಾಡಿ ಗ್ರಾಮದಲ್ಲಿ ಆಗುತ್ತಿರುವ ಆಕ್ರಮ ಕಟ್ಟಡ, ರಸ್ತೆ ಒತ್ತುವರಿ ಇನ್ನಿತರೆ ಆಕ್ರಮಗಳಿಗೆ ಕಡಿವಾಣ ಹಾಕಬೇಕೆಂದು ಕೇಳಿಕೊಳ್ಳುತ್ತೇವೆ.
ಇಂತಿ ಅಬ್ಬಿಗೇರಿಯ ಸಾರ್ವಜನಿಕರು.
Was this information helpful?
No (0)
Yes (1)
Karnataka RDPR customer support has been notified about the posted complaint.
Customer satisfaction rating Customer satisfaction rating is a complex algorithm that helps our users determine how good
a company is at responding and resolving complaints by granting from 1 to 5 stars for each
complaint and then ultimately combining them all for an overall score. Read more
Post your Comment